ಶೀಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಎಂ.ಚಂದ್ರು(ssಸ್ವಯಂವರ) ಅವರು ನಿರ್ಮಿಸುತ್ತಿರುವ ‘ಕಡ್ಡಿಪುಡಿ ಚಿತ್ರ ಮಾಸಾಂತ್ಯಕ್ಕೆ ಇದೇ ತಿಂಗಳ ಇಪ್ಪತ್ತಾರರಂದು ಆರಂಭವಾಗಲಿದೆ.
ಹ್ಯಾಟ್ರಿಕ್ಹೀರೋ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು ಸೂರಿ ನಿರ್ದೇಶಿಸುತ್ತಿದ್ದಾರೆ. ‘ಕಡ್ಡಿಪುಡಿ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ರಾಧಿಕಾಪಂಡಿತ್, ರಂಗಾಯಣರಘು, ಶರತ್ಲೋಹಿತಾಶ್ವಾ, ಸ್ವಯಂವರ ಚಆಮ್ದ್ರು, ರೇಣುಕಾಪ್ರಸಾದ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರದಲ್ಲಿ ಐದು ಹಾಡುಗಳಿವೆ. ಬೆಂಗಳೂರು, ಮೈಸೂರು ಮುಂತಾದಕಡೆ ಚಿತ್ರದ ಚಿತ್ರೀಕರಣ ನಡೆಯಲಿದೆ.
ಕೃಷ್ಣ ಅವರ ‘ಕಡ್ಡಿಪುಡಿಗೆ ದೀಪು.ಎಸ್.ಕುಮಾರ್ ಅವರ ಸಂಕಲನವಿದೆ. ರವಿವರ್ಮ ಸಾಹಸ ನಿರ್ದೇಶನ, ಮದನ್ ಹರಿಣಿ ನೃತ್ಯ ನಿರ್ದೇಶನ ಹಾಗೂ ಶಶಿಧರ ಅಡಪರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.